ಐರೋಡಿಗೆ ಉಪಾಧ್ಯಾಯ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಡಿಸೆ೦ಬರ್ 30 , 2013
|
ಡಿಸೆ೦ಬರ್ 30, 2013
|
ಐರೋಡಿಗೆ ಉಪಾಧ್ಯಾಯ ಪ್ರಶಸ್ತಿ
ಮಂಗಳೂರು :
ಹನ್ನೆರಡನೇ ವಯಸ್ಸಿಗೆ ಯಕ್ಷಗಾನರಂಗಕ್ಕೆ ಪಾದಾರ್ಪಣೆ ಮಾಡಿ ಯಕ್ಷಗಾನದ ಸವ್ಯಸಾಚಿ ಎನಿಸಿದ ಐರೋಡಿ ಗೋವಿಂದಪ್ಪ ಅವರನ್ನು ಈ ವರ್ಷದ ಕೆ.ಎಸ್. ಉಪಾಧ್ಯಾಯ ಯಕ್ಷಗಾನ ಕಲಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯಕ್ಷಗಾನ ಕಲೆಗಾಗಿ ಶ್ರಮಿಸಿದ ಹಿರಿಯ ಪತ್ರಕರ್ತ ಉಪಾಧ್ಯಾಯರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
ಗೋಳಿಗರಡಿ ಮೇಳದಿಂದ ಆರಂಭವಾಗಿ ಪೆರ್ಡೂರು, ಸೋಮನಾಥೇಶ್ವರ, ಸಾಲಿಗ್ರಾಮ, ಕಣಿಪುರ, ಅಮೃತೇಶ್ವರಿ ಮೇಳಗಳ ಸತತ 40 ವರ್ಷಗಳಷ್ಟು ಕಾಲ ತಿರುಗಾಟ ಮಾಡಿದ, 50 ವರ್ಷಕ್ಕೂ ಮಿಕ್ಕಿ ಯಕ್ಷಗಾನ ಕಲಾಸೇವೆ ನಡೆಸಿದ ಐರೋಡಿ ಗೋವಿಂದಪ್ಪ ತೆಂಕು ಮತ್ತು ಬಡಗುತಿಟ್ಟುಗಳ ಪ್ರಾವೀಣ್ಯ ಹೊಂದಿದವರಾಗಿದ್ದು, ಕುಣಿತ, ಅರ್ಥಗಾರಿಕೆ ಜತೆಯಲ್ಲಿ ಭಾಗವತಿಕೆ, ಚಂಡೆ, ಮದ್ದಳೆ, ವೇಷಭೂಷಣಗಳಲ್ಲೂ ಪಾಂಡಿತ್ಯ ಸಾಧಿಸಿದವರು.
ಉಪಾಧ್ಯಾಯ ಟ್ರಸ್ಟ್ ಅಧ್ಯಕ್ಷೆ ಡಾ| ಲೀಲಾ ಉಪಾಧ್ಯಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಭೆಯಲ್ಲಿ ಸುಬ್ರಾಯ ಕಾರಂತ, ಎನ್.ಎಸ್. ಚಕ್ಕೇರ, ರಘುರಾಮ ರಾವ್, ಕೆ. ರಮೇಶ ರಾವ್, ಎ.ಎಸ್.ಎನ್. ಹೆಬ್ಟಾರ್ ಉಪಸ್ಥಿತರಿದ್ದರು. ಪ್ರಶಸ್ತಿ 15,000 ರೂ. ನಗದನ್ನು ಹೊಂದಿದೆ.
ಕೃಪೆ :
http://www.udayavani.com
|
|
|